ಎಂಡೋಸಲ್ಫಾನ್ನಿಂದ ಅಂಗವಿಕಲರಾದವರಿಗೆ ಪರಿಹಾರ ಕೊಡಿಸಲು ಹೋರಾಟ
Wednesday, February 24th, 20101976ನೇ ಇಸವಿಯಿಂದ 2000ದ ತನಕ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ, ಕೌಕ್ರಾಡಿ, ಕುಂತೂರು ಗ್ರಾಮ ಪಂಚಾಯತ್ಗಳಲ್ಲಿ ಸುಮಾರು 800 ಎಕರೆ ಗೇರು ಬೆಳೆಗೆ ಎಂಡೋಸಲ್ಫಾನ್ನ್ನು ಹೆಲಿಕಾಪ್ಟರ್ನಿಂದ ಸಿಂಪಡಿಸಲಾಯಿತು. ಎಂಡೋಸಲ್ಫಾನ್ ಅನ್ನುವ ಕ್ರಿಮಿನಾಶಕ ಇಷ್ಟೊಂದು ಭಯಾನಕ ಎಂದು ಜನರಿಗೆ ಗೊತ್ತಿಲ್ಲದ ಕಾಲ ಅದು. ಈ ಗ್ರಾಮಗಳ ಸರ್ಕಾರಿ ಗೇರು ತೋಟದ ಗೇರು ಹೂವಿನ ರಕ್ಷಣೆಗಾಗಿ ಸಿಂಪಡಿಸಿದ್ದರೂ ಈ ಔಷಧಿ ಅಲ್ಲಿ ವಾಸಿಸುವ ಜನರ ತೋಟದ ಮೇಲೆ ಅವರ ತರಕಾರಿ, ಹಣ್ಣುಗಳ ಮೇಲೆ, ಕುಡಿಯುವ ನೀರಿನ ತೆರೆದ ಬಾವಿ [...]



