+91 80-22359430
nimma.shobha@gmail.com

ಸಾರ್ವಜನಿಕರಿಗೆ ಮತ್ತು ಮಾಧ್ಯಮ ಮಿತ್ರರಿಗೆ ನನ್ನದೊಂದು ಕಳಕಳಿಯ ವಿನಂತಿ

Thursday, August 25th, 2011

ದಿನಾಂಕ 24 .08 .2011 ರಂದು ರಾಜ್ಯದ ಪ್ರಮುಖ ಸುದ್ದಿ ವಾಹಿನಿಯೊಂದು ನನ್ನ ಬಗ್ಗೆ ಸುಳ್ಳು ಸುದ್ದಿಯೊಂದನ್ನು ಪ್ರಸಾರ ಮಾಡಿತೆಂದು ಕೇಳಿ ತಿಳಿದುಕೊಂಡೆ. ಈ ಸುದ್ದಿಯ ಬಗೆಗಿನ ಸತ್ಯಾಸತ್ಯತೆಯನ್ನು ರಾಜ್ಯದ ಇತರ ಮಾಧ್ಯಮಗಳು ತಿಳಿದುಕೊಳ್ಳಬೇಕೆಂಬ ವಿನಂತಿಯನ್ನು ಎಲ್ಲಾ ಮಾಧ್ಯಮ ಮಿತ್ರರಲ್ಲಿ ಮಾಡುತ್ತಿದ್ದೇನೆ. ಇಂತಹ ಪ್ರಕರಣಗಳು ಸಾರ್ವಜನಿಕ ಬದುಕಿನಲ್ಲಿರುವವರ ನನ್ನಂತಹವರ ಮೇಲೆ ಸಂಶಯವನ್ನು ಮೂಡಿಸುತ್ತದೆ.  ಈ ಸುದ್ದಿ ಸತ್ಯವೇ ? ಅಥವಾ ಇದರ ಹಿಂದಿರುವ ಉದ್ದೇಶವೇನು ? ಎಂದು ತಿಳಿದುಕೊಳ್ಳುವ ಹಕ್ಕು [...]

ವಿಕೇಂದ್ರಿಕರಣ – ಜನರಿಂದ ಜನರಿಗಾಗಿ

Saturday, December 18th, 2010

ವಿಕೇಂದ್ರಿಕರಣ ಪ್ರಜಾಪ್ರಭುತ್ವದ ಒಂದು ಸುಂದರ ಪರಿಕಲ್ಪನೆ. ಆಯಾ ಊರಿನ ಅಭಿವೃದ್ದಿಗಾಗಿ ಜನರ ಕೈಗೆ ಹಣ, ಅದರ ಉಪಯೋಗದ ಅಧಿಕಾರ ಕೊಡುವ ಅಧ್ಬುತ ವ್ಯವಸ್ಥೆ. ನಮ್ಮ ಊರಿಗೆ ಏನು ಬೇಕು, ಆಧ್ಯತೆ ಯಾವುದು ಮತ್ತು ಯಾರಿಗೆ ಅನ್ನುವುದನ್ನು ಆ ಊರಿನ ಜನರೇ ನಿರ್ಧರಿಸಬಹುದಾದ, ನಿಜವಾದ ಅರ್ಥದಲ್ಲಿ ‘ಪ್ರಜಾಪ್ರಭುತ್ವ’ದ ಸುಂದರ ಕಲ್ಪನೆ. ಮಹಾತ್ಮ ಗಾಂಧೀಜಿರವರ ಕನಸು ಇದೇ ಆಗಿತ್ತು. ಗ್ರಾಮದಲ್ಲಿ ಜನರ ಕೈಗೆ ಅಧಿಕಾರ ಕೊಡಬೇಕು. [...]

ನಮ್ಮ ನಾಯಕರಿಗೇನಾಗಿದೆ?

Thursday, September 2nd, 2010

ಸ್ವಾತಂತ್ರ್ಯ ಸಿಕ್ಕಿದ 64  ವರ್ಷಗಳಲ್ಲೇ ಅಧಿಕಾರದ ಮದ, ಓಟು ಬ್ಯಾಂಕಿನ ಪಿತ್ತ, ಬುದ್ಧಿಶಕ್ತಿಯ ಭ್ರಮಣೆ, ರಾಷ್ಟ್ರಪ್ರೇಮದ ದಾರಿದ್ರ್ಯ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಗುತ್ತದೆಯೆಂದು ಅಂದು ದೇಶಕ್ಕಾಗಿ ಹೋರಾಟ ಮಾಡುತ್ತಿದ್ದ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಅನಿಸಿದ್ದರೆ, ಆ ಮುಂದಾಲೋಚನೆ ಅವರು ಮಾಡಿದ್ದರೆ ಸ್ವಾತಂತ್ರ್ಯ ಹೋರಾಟವೇ ಮಾಡುತ್ತಿರಲಿಲ್ಲವೇನೋ! ಎಂದು ನಮಗನಿಸಲು ಆರಂಭವಾಗಿದೆ. ಯಾವ ಕನಸನ್ನು ಹೊತ್ತು ಅವರು ಹೋರಾಟ ಮಾಡಿದ್ದರೋ, ಆ ಕನಸನ್ನು ನನಸು ಮಾಡಲು ಇಡೀ ದೇಶ ಒಟ್ಟಾಗಿ ಶ್ರಮಿಸುವ ಬದಲು [...]

ನಾವು ಇಷ್ಟು ದುರ್ಬಲರೇ?

Wednesday, August 18th, 2010

ಹಿಂದುಸ್ಥಾನ, ಭಾರತ, ಭರತಖಂಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈಗಿನ ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಟಿಬೇಟ್, ಶ್ರೀಲಂಕಾ ಸೇರಿದಂತೆ ಇದ್ದ ಅಖಂಡ ಭಾರತದ ಹಲವಾರು ಐತಿಹಾಸಿಕ, ಧಾರ್ಮಿಕ ಸ್ಥಳಗಳ ಬಗ್ಗೆ ನಮ್ಮ ವೇದ ಪುರಾಣಗಳಲ್ಲಿ ಉಲ್ಲೇಖವಿದೆ. ಮಹಾಭಾರತದ ಗಾಂಧಾರ ದೇಶ ಈಗಿನ ಪಾಕಿಸ್ತಾನದಲ್ಲಿತ್ತು ಎನ್ನುತ್ತೇವೆ. ತಾಯಿ ಭಾರತಿ ತನ್ನ ಒಂದೊಂದೇ ಅಂಗಗಳನ್ನು ಕಳಚಿಕೊಳ್ಳುತ್ತಾ ಈಗ ತನ್ನ ತಲೆಯನ್ನು ಕಳಚಿಕೊಳ್ಳುವಷ್ಟು, ತುಂಡು ಮಾಡಿಕೊಳ್ಳುವಷ್ಟು ದುರ್ಬಲಳಾಗಿ ನಿಂತಿದ್ದಾಳೆ. ಮಗ ಸಮಾಜದ್ರೋಹಿ, ದೇಶದ್ರೋಹಿ ಆದಾಗ [...]

ನನಗೆ ಕ್ಷಮೆಯಿರಲಿ

Sunday, July 18th, 2010

ಪ್ರಜಾಪ್ರಭುತ್ವದ ದುರಾದೃಷ್ಟ. ರಾಜ್ಯದ ಶಕ್ತಿಕೇಂದ್ರದಲ್ಲಿ ಜನರ ಭಾವನೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ವಿಧಾನಸೌಧ ಅಕ್ಷರಶಃ ಕುಸ್ತಿಯ ಅಖಾಡವಾಗಿ ಪರಿಣಮಿಸಿದ್ದು ಪ್ರಜಾಪ್ರಭುತ್ವದ ಅಣಕವೇ ಆಗಿತ್ತು. ನಾನಂತು ಈ ಬಾರಿಯ ಅಧಿವೇಶನಕ್ಕೆ ಬಹಳ ತಯಾರಿ ನಡೆಸಿದ್ದೆ.
ಒಂದು ತಿಂಗಳ ಕಾಲ ಅಧಿವೇಶನ ನಡೆಯುತ್ತದೆ, ರಾಜ್ಯದ ಜನರ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಸದನದಲ್ಲಿ ಉತ್ತರ ಪಡೆದಾಗ ಮಂತ್ರಿಗಳು, ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಪರಿಹಾರ ನೀಡುತ್ತಾರೆ, ಹೆಚ್ಚು ಕಾಳಜಿ ವಹಿಸುತ್ತಾರೆ ಅನ್ನುವ ಭಾವನೆಯಿತ್ತು. ಬಹಳ ವರ್ಷಗಳಿಂದ ಸಮಸ್ಯೆಯಾಗಿಯೇ [...]

ಮಾನಸ ಸರೋವರ ಕೈಲಾಸ ಪರಿಕ್ರಮ

Saturday, June 12th, 2010

ಮಾನಸ ಸರೋವರ ಕೈಲಾಸ ಪರಿಕ್ರಮ ಒಂದು ರೋಚಕ ಅನುಭವ. ಕಳೆದ ಹತ್ತು ವರ್ಷಗಳಿಂದ ಮಾನಸ ಸರೋವರವನ್ನು ಮತ್ತು ಕೈಲಾಸವನ್ನು ಭಾರತ ಕಳೆದುಕೊಂಡಿದರ ಬಗ್ಗೆ ಒಂದಿಲ್ಲ ಒಂದು ವೇದಿಕೆಯಲ್ಲಿ ಭಾಷಣ ಮಾಡ್ತಿದ್ದೆ.
1962ರ ಭಾರತ-ಚೀನಾ ಯುದ್ದದಲ್ಲಿ ನಮ್ಮ ಶ್ರದ್ದಾ ಕೇಂದ್ರ, ಪವಿತ್ರ ಕ್ಷೇತ್ರವನ್ನು ಅಲ್ಲಿ ಒಂದು ಹುಲ್ಲುಕಡ್ಡಿಯು ಬೆಳೆಯುವುದಿಲ್ಲ ಎಂಬ ಹೇಳಿಕೆಯನ್ನು ಪಾರ್ಲಿಮೆಂಟ್‌ಲ್ಲಿ ನೀಡಿ ಹೇಗೆ ಕೈಲಾಸವನ್ನು ನಮ್ಮ ನಾಯಕರು ಅನಾಯಸವಾಗಿ ಬಿಟ್ಟು ಕೊಟ್ಟರು ಎಂಬುದನ್ನು ಸಾಧ್ಯವಾದ ಕಡೆಯೆಲ್ಲಾ ಹೇಳುತ್ತಿದ್ದೆ. ಪ್ರತಿಬಾರಿಯೂ ಭಾಷಣ ಮಾಡುವಾಗ ನಾನೂ ಅಲ್ಲಿ ಹೋಗಿ ನೋಡಿ [...]

ಪ್ರಕೃತಿಯ ಮುಂದೆ ನಾವೆಷ್ಟು ಕುಬ್ಜರು!

Friday, May 14th, 2010

ಜಗತ್ತಿನಲ್ಲಿ ಪ್ರಸ್ತುತ ಚರ್ಚೆಯಾಗುತ್ತಿರುವ ಬಿಸಿ ಬಿಸಿ ಸುದ್ದಿಯೆಂದರೆ ಪರಿಸರದ ತಾಪಮಾನ ಹೆಚ್ಚಳದ ಬಗ್ಗೆ. ಹಾಗೇನೇ 2012 ಕ್ಕೆ ಪ್ರಳಯ ಆಗುತ್ತಂತೆ ನಿಜನಾ? ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. 2012 ಕ್ಕೆ ಅಥವಾ ಇನ್ಯಾವಾಗಲೋ ಪ್ರಳಯ ಆಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಸಧ್ಯ ಪ್ರಪಂಚದಲ್ಲಿ ನಡೆಯುತ್ತಿರುವ ಪರಿಸರ, ಪ್ರಕೃತಿಯ ಏರುಪೇರುಗಳು ಮಾನವನಲ್ಲಿ ಭಯವನ್ನು ನಿರ್ಮಾಣ ಮಾಡಿದೆ. ಕೆಲವು ದೇಶದಲ್ಲಿ ಭೂಕಂಪ, ಇನ್ನು ಕೆಲವು ಕಡೆ ಜ್ವಾಲಾಮುಖಿ ಮತ್ತೊಂದು ಕಡೆ ಅತಿಯಾದ ಮಳೆ, ನೀರು ಇನ್ನೊಂದು ಕಡೆ ಬರಗಾಲ, ಎಲ್ಲಾ [...]

ಸ್ವದೇಶಿ ವಿಚಾರ ಧಾರೆ ದೇಶಕ್ಕೆ ಅನಿವಾರ್ಯ

Wednesday, April 14th, 2010

ಕಳೆದ ಬಾರಿ ನಾನು ಗೋಹತ್ಯೆ ನಿಷೇಧದ ಬಗ್ಗೆ ಬರೆದಿದ್ದೆ. ನನ್ನ ಕಳಕಳಿ ಇಷ್ಟೇ ಆಗಿತ್ತು, ನಮ್ಮ ಗೋವನ್ನು ನಾವು ಉಳಿಸಿಕೊಂಡರೆ ರೈತ ಉಳಿಯುತ್ತಾನೆ. ಅದರ ಮುಖಾಂತರ ನಾವು ಉಳಿಯುತ್ತೇವೆ ಎಂಬುದು. ನಮ್ಮ ತಳಿಗಳು ನಮ್ಮ ದೇಶದ ಯಾವುದೇ ಹವಾಗುಣಕ್ಕೆ ಹೊಂದಿಕೊಳ್ಳುತ್ತವೆ. ಅತಿಯಾದ ಚಳಿ, ವಿಪರೀತ ಮಳೆ, ಒಣ ಬಿಸಿಲು ಇದೆಲ್ಲಕ್ಕೂ ಒಗ್ಗುವ ಗೋವುಗಳು ಮತ್ತು ಸಸ್ಯ ಪ್ರಬೇಧಗಳು ನಮ್ಮಲ್ಲಿವೆ. ಔಷಧಿಯಾಗಬಲ್ಲ ಈ ತಳಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಕೂಡ. ಮೊನ್ನೆ ನಾನು ಸ್ವದೇಶಿ ಭತ್ತದ ತಳಿಗಳ ಉತ್ಸವದಲ್ಲಿ [...]

ಗೋಹತ್ಯೆ ನಿಷೇಧ ಕಾಯಿದೆ ಬೇಕು-ಬೇಡ

Tuesday, March 23rd, 2010

ಅಹಿಂಸಾವಾದಿ ಮಹಾತ್ಮ ಗಾಂಧೀಜಿಯವರು  ಸ್ವಾತಂತ್ರಕ್ಕಾಗಿ ಹೋರಾಟ ಮಾಡುತ್ತಾ ದೇಶದಲ್ಲಿರುವ ದುಷ್ಟ ಪದ್ದತಿಗಳ ಬಗ್ಗೆ ಜನಮಾನಸದಲ್ಲಿ ಜನಜಾಗೃತಿ ಮೂಡಿಸಿದರು. ಅಸ್ಪೃಶ್ಯತೆ, ಬಾಲ್ಯವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯ, ಗೋಹತ್ಯೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಹೊರಾಡುವ ಮನೋಭಾವವನ್ನು ಬೆಳೆಸಿದರು. ಎಲ್ಲರ ಭಾವನೆ ಮತ್ತು ಹೋರಾಟದ ಕಾರಣಕ್ಕಾಗಿ ಸಮಾಜದ ಆಗಿನ ಈ ಎಲ್ಲಾ ಸ್ಥಿತಿಗತಿಗಳನ್ನು ಡಾ|| ಬಾಬಾ ಸಾಹೇಬ ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಯಿತು.
ಸ್ವಾತಂತ್ರ್ಯ ಬಂದು 62 ವರ್ಷ ಕಳೆದು ಹೊಗಿದೆ. ಗಾಂಧೀಜಿಯವರ ಕನಸು, ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ನಮಗೆ ಈ ಆರು [...]

ವೆಬ್ ಸೈಟ್ ಉಧ್ಘಾಟನೆ ಮತ್ತು ಜನರ ಪ್ರತಿಕ್ರಿಯೆ

Tuesday, March 9th, 2010

ಗೌರವಾನ್ವಿತರಾದ ಶ್ರೀಮತಿ ಸುಧಾಮೂರ್ತಿಯವರ ಅಮೃತ ಹಸ್ತದಿಂದ ವೆಬ್‌ಸೈಟ್ ಆರಂಭ ಆಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯ ಮಹಿಳೆಯರು ಕಾರ್ಯಕ್ರಮಕ್ಕೆ ಬಂದು ಹರಸಿದರು. ಮೊದಲ ದಿನವೇ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಎಷ್ಟಿದೆ ಅನ್ನುವುದು ಗಮನಕ್ಕೆ ಬಂತು.
2800 ಜನ ವೆಬ್‌ಸೈಟನ್ನು ಮೊದಲ ದಿನದಂದೇ ವೀಕ್ಷಣೆ ಮಾಡಿದ್ದೀರಿ, ಧನ್ಯವಾದಗಳು. ಸಾರ್ವಜನಿಕ ಮತ್ತು ವೈಯಕ್ತಿಕ ಸಮಸ್ಯೆಗಳ ಕುರಿತು ತುಂಬಾ ಜನ ಬರೆದಿದ್ದೀರಿ. ಸಾರ್ವಜನಿಕ ಕುಂದು ಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರಿಸುತ್ತೇನೆ. ಆದರೆ ತೀರಾ ವೈಯಕ್ತಿಕ ಸಮಸ್ಯೆಗಳಿಗೆ ತಕ್ಷಣ [...]

Website last updated on February 13, 2012 @ 2:56 pm