+91 80-22359430
nimma.shobha@gmail.com

1. ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯೆಯಾಗಿ ಸೇವೆ 2. ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಪರಿಶ್ರಮ

1993-94ರ ಅವಧಿಯಲ್ಲಿ ಕುಮಾರಧಾರ ನದಿ ಉಳಿಸಿ ಹೋರಾಟ ಸಮಿತಿಯಲ್ಲಿ ಪ್ರಮುಖ ಪಾತ್ರ. ಕೊಜೆಂಟ್ರಿಕ್ಸ್ ವಿರುದ್ಧ ಹೋರಾಟ. ಪರಿಸರ ಜಾಗೃತಿ ವಿಶೇಷವಾಗಿ ಅಪ್ಪಿಕೋ ಚಳುವಳಿ ಮತ್ತು ಕರಾವಳಿ ಸಂರಕ್ಷಣೆಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯ ಭಾಗವಹಿಸುವಿಕೆ. ವಿದ್ಯಾರ್ಥಿ, ರೈತ ಹಾಗೂ ಮಹಿಳೆಯರ ಪರವಾದ ಚಳುವಳಿಯಲ್ಲಿ ರಾಜ್ಯಾದ್ಯಂತ ಸಕ್ರಿಯ ಪಾತ್ರ. ಕನ್ನಡಪರ ಚಳುವಳಿಗಳಲ್ಲಿ ಮುಂಚೂಣಿ ಪಾತ್ರ. ಸುನಾಮಿ ಸಂತ್ರಸ್ಥರ ಪರಿಹಾರ ಕಾರ್ಯದಲ್ಲಿ ಭಾಗಿ.

ವಿದ್ಯಾರ್ಥಿ ದಿಸೆಯಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಮಾಜಸೇವಕ ಕ್ಷೇತ್ರಕ್ಕೆ ಪಾದಾರ್ಪಣೆ. ಶ್ರೀರಾಮ ಜನ್ಮಭೂಮಿ ಮುಕ್ತಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಣೆ. 1992-97 – ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ 1998 – ಪೂರ್ಣಾವಧಿ ಬಿಜೆಪಿ ಕಾರ್ಯಕರ್ತೆ. 1999 – ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಸಕ್ರಿಯ ಪಾತ್ರ

2004-08 – ವಿಧಾನ ಪರಿಷತ್ ಸದಸ್ಯೆಯಾಗಿ ಸೇವೆ

2008 – ವಿಧಾನ ಸಭಾ ಸದಸ್ಯೆ (2008ರ ಮೇ ಮಾಹೆಯಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಆಯ್ಕೆ).

ದಿನಾಂಕ 30.05.2008 ರಿಂದ 09.11.2009ರ ವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆಯ ಸಚಿವ ಸಂಪುಟ ದರ್ಜೆ ಸಚಿವೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಯೋಜನೆ ಅನುಷ್ಠಾನದಲ್ಲಿ ಇದ್ದ ಹಲವಾರು ತೊಡಕುಗಳನ್ನು ನಿವಾರಿಸಲು ಕ್ರಮ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೀಮಿತವಾಗಿದ್ದ ಯೋಜನೆ ವ್ಯಾಪ್ತಿಯನ್ನು ಕೃಷಿ, ತೋಟಗಾರಿಕೆ, ಅರಣ್ಯ, ನೀರಾವರಿ, ಜಲಾನಯನ ಮುಂತಾದ ಎಲ್ಲಾ ಇಲಾಖೆಗಳಿಗೂ ವಿಸ್ತರಿಸಲು ಕ್ರಮ. ಕೇವಲ ಬಡತನದ ರೇಖೆಗಿಂತ ಕೆಳಗಿನ ಜನರಿಗೆ ಇದ್ದ ಅನುಕೂಲಗಳನ್ನು ಎಲ್ಲಾ ವರ್ಗದವರಿಗೆ ವಿಸ್ತರಿಸಲು ಕ್ರಮ. ಯೋಜನೆ ಅನುಷ್ಠಾನಕ್ಕೆ ಅವಶ್ಯವಿದ್ದ ಸಿಬ್ಬಂದಿ ನೇಮಕಕ್ಕೆ [...]

ಸಾಧನೆಗಳು ಪಾರಂಪರಿಕ ಕುಕ್ಕರಹಳ್ಳಿ ಕೆರೆಗೆ ಕಾಯಕಲ್ಪ – ೨ ಕೋಟಿ ರೂ ಬಿಡುಗಡೆ. ಮೈಸೂರಿನ ‘ಕಾವಾ’ ಕ್ಕೆ ಪ್ರತ್ಯೇಕ ಸ್ಥಳಾವಕಾಶ. ಲಲಿತ ಕಲೆಗಳ ವಿ.ವಿ. ಗೆ ವಿಶಾಲವಾದ ಭೂಮಿ ನೀಡಿಕೆ. ಪ್ರಸಿದ್ಧ ಕೆ.ಆರ್. ಆಸ್ಪತ್ರೆಗೆ ಕಾಯಕಲ್ಪ. JNURM- ಯೋಜನೆಗೆ ವೇಗ ನೀಡಿದ್ದು, ರೂ. 100 ಕೋಟಿ ಯೋಜನೆ ಮೂಲಕ ಅಭಿವೃದ್ಧಿ. ಕಬಿನಿ ನದಿ ನೀರು ಮೈಸೂರಿಗೆ. ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಚಿಂತನೆ. ಮೈಸೂರು ದಸರಾ (2008-2009) ನಾಡಹಬ್ಬವಾಗಿ ಆಚರಣೆ. ದಸರಾಕ್ಕೆ ಹೊಸ ಆಯಾಮ : ದಸರಾ [...]

Website last updated on April 7, 2013 @ 6:47 pm